ಇನ್ನು ಪ್ರಕೃತಿಯಲ್ಲಿ ಲಭ್ಯವಿರುವಂಹ ಹಣ್ಣುಗಳು, ಹೂವುಗಳು, ತರಕಾರಿಗಳು, ಸೊಪ್ಪುಗಳು, ಗಡ್ಡೆಗಳು ಮತ್ತು ಧಾನ್ಯಗಳು, ಎಣ್ಣೆಗಳು, ಪಾನೀಯಗಳು ಮತ್ತು ಔಷಧಿಯ ಗುಣವುಳ್ಳಂತಹ ಹಲವಾರು ಆಹಾರ ಪದಾರ್ಥಗಳ ಬಗ್ಗೆ ಒದಗಿಸಿರುವಂತಹ ಮಾಹಿತಿಗಳು ಅನನ್ಯವಾಗಿವೆ ಮತ್ತು ಬಹಳ ಉಪಯುಕ್ತವಾಗಿವೆ.
ಈಗಾಗಲೇ ಸಾಹಿತ್ಯ ಕೃಷಿಯಲ್ಲಿರುವ ಇವರು ಹಲವಾರು ಆರೋಗ್ಯ ಸಂಬAಧಿತ ವಿಷಯಗಳ ಬಗ್ಗೆ ಕೃತಿಗಳ ರಚನೆ ಮಾಡಿರುವುದು ಅಭಿಮಾನ ಮತ್ತು ಅಭಿನಂದನೀಯ ಸಂಗತಿಯಾಗಿದೆ.
ಕಲಾಶ್ರೀ ಡಾ. ವಿಜಯಮಾಲಾ ರಂಗನಾಥ್ ಅವರು ಬರೆದಿರುವಂತಹ ಈ ಆರೋಗ್ಯಪ್ರಭ ಗ್ರಂಥವು ಆರೋಗ್ಯಸಾಹಿತ್ಯ ಕ್ಷೇತ್ರದಲ್ಲಿ ಪ್ರಭೆಯನ್ನು ಮೂಡಿಸಲಿ. ಕನ್ನಡ ವೈದ್ಯ ಸಾಹಿತ್ಯದ ಬೆಳವಣಿಗೆಯನ್ನು ತುಂಬು ಹೃದಯದಿಂದ ಸ್ವಾಗತಿಸೋಣ.
ಇದರಿಂದ ‘ಆರೋಗ್ಯಪ್ರಭ’ ದಂತಹ ಮೌಲಿಕ ಕೃತಿಗಳು ಹೆಚ್ಚಾಗಿ ಹೊರಹೊಮ್ಮಲಿಯೆಂದು ಆಶಿಸುತ್ತೇನೆ.
- ಡಾ|| ಬಿ. ಗುರುಬಸವರಾಜ.
ಪ್ರಾಧ್ಯಾಪಕ ಮತ್ತು ತಜ್ಞವೈದರು
ಜೆಎಸೆಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ.
ಮೈಸೂರು.
ಕನ್ನಡದಲ್ಲಿ ವೈದ್ಯ ಸಾಹಿತ್ಯದಲ್ಲಿ ತರುವಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಈ ಪ್ರಯತ್ನಗಳು ಎರಡು ಪ್ರಕಾರವಾಗಿರುವುದನ್ನು ಕಾಣಬಹುದಾಗಿದೆ. ಒಂದು ಆರೋಗ್ಯ ಸಾಹಿತ್ಯ ಮತ್ತೊಂದು ವೈದ್ಯಕೀಯ ಶಿಕ್ಷಣ ಸಾಹಿತ್ಯ. ‘ಕರಣಹಸಿಗೆ’ ಕನ್ನಡದ ಪ್ರಥಮ ವೈದ್ಯಕೀಯ ಗ್ರಂಥವೆAದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.
ಆರೋಗ್ಯ ಸಾಹಿತ್ಯವನ್ನು ಶ್ರೀಮಂತಗೊಳಿಸುವAತಹ ಪ್ರಯತ್ನವು ಆರಂಭವಾಗಿದ್ದು ಕನ್ನಡದ ಅಕ್ಕ ಡಾ. ಅನುಪಮ ನಿರಂಜನ ಅವರಿಂದ, ತದನಂತರ ಆರೋಗ್ಯ ಸಾಹಿತ್ಯವನ್ನು ತಿಳಿಸುವಂತಹ ಸಾಕಷ್ಟು ಕೃತಿಗಳೂ ರಚನೆಯಾಗುತ್ತಾ ಬಂದಿದ್ದರೂ, ಕಲಾಶ್ರೀ ಡಾ. ವಿಜಯಮಾಲ ರಂಗನಾಥವರ ಆರೋಗ್ಯ ಪ್ರಭವು ಪ್ರಭೆಯನ್ನು ಬೀರುವಂತಹ ಬೃಹತ್ ಕೈಪಿಡಯಾಗಿದೆಯೆಂದರೆ ಅತಿಶಯೋಕ್ತಿ ಅಲ್ಲ. ಇದು ಹಲವಾರು ಮಹತ್ವವಾದ ವಿಷಯಗಳನ್ನು ದಾಖಲಿಸುವ ಮೂಲಕ ಒಂದು ಆಕರಗ್ರಾಂಥವಾಗಿದೆ ಎಂದು ನನ್ನ ಸ್ಪಷ್ಟವಾದ ಅಭಿಪ್ರಾಯವಾಗಿದೆ ಮತ್ತು ಸಂತಸದ ವಿಷಯವೂ ಆಗಿದೆ.
ಈ ಕೃತಿಯನ್ನು ಕುರಿತು ಕೆಲವು ಸಂಗತಿಗಳನ್ನು ದಾಖಲಿಸುವುದಾದರೆ, ಕೃತಿಯು ಆರೋಗ್ಯದ ಎಲ್ಲಾ ಆಯಾಮಗಳನ್ನು ತೆರೆದಿಡುತ್ತದೆ. ಲೇಖಕರು ಇಂದಿನ ಯುಗಧರ್ಮಕ್ಕೆ ಅನುಗುಣವಾಗಿ ಬರುತ್ತಿರುವ ರೋಗಗಳು. ಜೀವನ ಶೈಲಿಯ ಮತ್ತು ಆಹಾರ ಕ್ರಮದ ವಿಷಯಗಳು ಹೇಗೆ ಕಾರಣವಾಗಿವೆ ಮತ್ತು ಅವುಗಳ ಪರಿಹಾರವನ್ನು ತಿಳಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡಿತ್ತಾರೆ.
ಇನ್ನು ಪ್ರಕೃತಿಯಲ್ಲಿ ಲಭ್ಯವಿರುವಂಹ ಹಣ್ಣುಗಳು, ಹೂವುಗಳು, ತರಕಾರಿಗಳು, ಸೊಪ್ಪುಗಳು, ಗಡ್ಡೆಗಳು ಮತ್ತು ಧಾನ್ಯಗಳು, ಎಣ್ಣೆಗಳು, ಪಾನೀಯಗಳು ಮತ್ತು ಔಷಧಿಯ ಗುಣವುಳ್ಳಂತಹ ಹಲವಾರು ಆಹಾರ ಪದಾರ್ಥಗಳ ಬಗ್ಗೆ ಒದಗಿಸಿರುವಂತಹ ಮಾಹಿತಿಗಳು ಅನನ್ಯವಾಗಿವೆ ಮತ್ತು ಬಹಳ ಉಪಯುಕ್ತವಾಗಿವೆ.
ಈಗಾಗಲೇ ಸಾಹಿತ್ಯ ಕೃಷಿಯಲ್ಲಿರುವ ಇವರು ಹಲವಾರು ಆರೋಗ್ಯ ಸಂಬAಧಿತ ವಿಷಯಗಳ ಬಗ್ಗೆ ಕೃತಿಗಳ ರಚನೆ ಮಾಡಿರುವುದು ಅಭಿಮಾನ ಮತ್ತು ಅಭಿನಂದನೀಯ ಸಂಗತಿಯಾಗಿದೆ.
ಕಲಾಶ್ರೀ ಡಾ. ವಿಜಯಮಾಲಾ ರಂಗನಾಥ್ ಅವರು ಬರೆದಿರುವಂತಹ ಈ ಆರೋಗ್ಯಪ್ರಭ ಗ್ರಂಥವು ಆರೋಗ್ಯಸಾಹಿತ್ಯ ಕ್ಷೇತ್ರದಲ್ಲಿ ಪ್ರಭೆಯನ್ನು ಮೂಡಿಸಲಿ. ಕನ್ನಡ ವೈದ್ಯ ಸಾಹಿತ್ಯದ ಬೆಳವಣಿಗೆಯನ್ನು ತುಂಬು ಹೃದಯದಿಂದ ಸ್ವಾಗತಿಸೋಣ.
ಇದರಿಂದ ‘ಆರೋಗ್ಯಪ್ರಭ’ ದಂತಹ ಮೌಲಿಕ ಕೃತಿಗಳು ಹೆಚ್ಚಾಗಿ ಹೊರಹೊಮ್ಮಲಿಯೆಂದು ಆಶಿಸುತ್ತೇನೆ.