ಆಬಿದ್ ಸುರತಿ
ಗುಜರಾತಿ ಮತ್ತು ಹಿಂದಿಯ ಅತಿ ಮುಖ್ಯ ಲೇಖಕರಲ್ಲಿ ಒಬ್ಬರಾಗಿರುವ ಆಬಿದ್ ಸುರತಿ ಕಾದಂಬರಿಕಾರರು, ಕಥೆಗಾರರು, ನಾಟಕಕಾರರು, ವ್ಯಂಗ್ಯ ಚಿತ್ರಕಾರರು, ಕಲಾವಿದರು ಮತ್ತು ಸಮಾಜ ಸೇವಕರಾಗಿ ಭಾರತದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಈವರೆಗೆ ೬೦ ಕ್ಕೂ ಮಿಕ್ಕಿ ಪುಸ್ತಕಗಳ ಕರ್ತೃಗಳು. ಫಿಲ್ಮ್ ಸರ್ಟಿಪಿಕೇಶನ್ ಬೋರ್ಡ್, ಫಿಲ್ಮ್ ರೈಟರ್ಸ್ ಅಸೋಸಿಯೇಷನ್ ಮತ್ತು ಅಸೋಸಿಯೇಷನ್ ಆಫ್ ರೈಟರ್ಸ್ ಆ್ಯಂಡ್ ಇಲೆಸ್ಟೆçÃಟರ್ಸ್ ಫಾರ್ ಚಿಲ್ಡçನ್ಸ್ (ದೆಹಲಿ)ನ ಸದಸ್ಯರೂ ಆಗಿರುವ ಸುರತಿಯವರು ಮುವತ್ತು ವರ್ಷಗಳ ಕಾಲ ಹಿಂದಿಯ ಅತ್ಯಂತ ಪ್ರತಿಷ್ಠಿತ ವಾರಪತ್ರಿಕೆಯಾಗಿದ್ದ ‘ಧರ್ಮಯುಗ’ ದಲ್ಲಿ ಜನಪ್ರಿಯ ಕಾರ್ಟೂನ್ ‘ಡಬ್ಬೂಜಿ’ ಬರೆದು ಮನೆ ಮಾತಾಗಿದ್ದಾರೆ. ಇವರ ಅನೇಕ ಕಾದಂಬರಿಗಳು ಒರಿಯಾ, ಉರ್ದು, ಪಂಜಾಬಿ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ.
ಆಬಿದ್ ಸುರತಿಯವರ ಬಗ್ಗೆಯೇ ಫಿಲ್ಮ್ ಡಿವಿಜನ್ ೧೯೭೨ರಲ್ಲಿ ಒಂದು ಚಿತ್ರವನ್ನು ತಯಾರಿಸಿದೆ. ಇದನ್ನು ಖ್ಯಾತಿವೆತ್ತ ಪ್ರಮೋದ್ ಪಾತಿ ನಿರ್ದೇಶಿಸಿದ್ದಾರೆ.
ಅನುವಾದಕರು:
ಡಿ.ಎನ್. ಶ್ರೀನಾಥ್
ಕನ್ನಡ-ಹಿಂದಿಯಲ್ಲಿ ಪರಸ್ಪರ ಅನುವಾದವನ್ನು ಕಳೆದ ೪೯ ವರ್ಷಗಳಿಂದ ಮಾಡುತ್ತಿರುವ ಡಿ.ಎನ್. ಶ್ರೀನಾಥ್ ಕನ್ನಡದ ಪತ್ರಿಕೆಗಳನ್ನು ಓದುತ್ತಿರುವ ಎಲ್ಲರಿಗೂ ಚಿರಪರಿಚಿತರು. ಇದುವರೆಗೆ ಇವರ ೯೫ಕ್ಕೂ ಮೇಲ್ಪಟ್ಟು ಅನುವಾದಿತ ಪುಸ್ತಕಗಳು ಪ್ರಕಟ ಗೊಂಡದ್ದು, ಕನ್ನಡದ ಪ್ರತಿಷ್ಠಿತ ಪತ್ರಿಕೆಗಳಾದ ಸುಧಾ, ಮಯೂರ, ತರಂಗ, ಮಂಗಳ, ತುಷಾರ ಪತ್ರಿಕೆಗಳಲ್ಲಿ ಇವರ ಇದುವರೆಗೆ ೧೮ ಅನುವಾದಿತ ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟ ಗೊಂಡಿದೆ. ಇವರು ಅನುವಾದಿಸಿದ ಕಥೆಗಳು ಮತ್ತು ಕವನಗಳು ಕನ್ನಡ ಮತ್ತು ಹಿಂದಿಯ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ/ಪ್ರಕಟಗೊಳ್ಳುತ್ತಿವೆ
- ಪ್ರಕಾಶಕರು.