ಹಿಮಾಲಯದಲ್ಲಿ ತಟ್ಟಿತೆ ಅಪರಾಧದ ಬಿಸಿ? ಎಂಟು ತಿಂಗಳ ಹಿಂದೆ ಕಾಣೆಯಾದ ದುಶ್ಯಂತರ ಪತ್ನಿ ನಿರ್ಮಲಾರನ್ನು ಉತ್ತರಾಖಾಂಡಲ್ಲಿ ಹುಡುಕುತ್ತ ಹೊರಟ ಪತ್ತೇದಾರ ಜೋಡಿ ವಿಜಯ್ ವಿಕ್ರಮ್ ಗೆ ಎದುರಾಯಿತೆ ಬೃಹತ್ ಅಂತರಾಷ್ಟ್ರೀಯ ಜಾಲ? ಹಲವಾರು ಆಳವಾದ ವಂಚನೆ ಮತ್ತು ಅಪಾಯಕಾರಿ ಯೋಜನೆಯನ್ನು ಬಿಡಿಸಿ ಜೀವಸಹಿತ ಬರುವುದು ಅಷ್ಟು ಸುಲಭವಲ್ಲ...ಅಲ್ಲಿ ನಡೆದ ಕೌತುಕ ರಹಸ್ಯ ಘಟನೆಗಳ ಬೆಂಬೆತ್ತಿದಾಗ, ಎದುರಾದ ಅಡಿಗಡಿಗೆ ಅಪಾಯವನ್ನು ' ಮೀರಬಲ್ಲರೆ ಪತ್ತೇದಾರರು? ಕೇವಲ ಮಿಸ್ಸಿಂಗ್ ಕೇಸ್ ಎಂದು ಹೊರಟವರಿಗೆ ಬಂದಿತೇಕೆ ಜೀವಾಪಾಯದ ರಿಸ್ಕ್?
ಆದರೆ ಅಲ್ಲಿ ಛಲ ಬಿಡದ ಸಾಹಸಿಗಳಿಗೆ ಕನ್ನಿಕಾ ಎಂಬ ದಿಟ್ಟ ಯುವತಿ ಜತಯಾಗುತ್ತಾಳೆ...ಈಗ ಕೇವಲ ನಿರ್ಮಲಾ ಮಾತ್ರವಲ್ಲ.. ಭೇಧಿಸಬೇಕಾದೀತು ಅಂತರಾಷ್ಟ್ರೀಯ ಜಾಲವನ್ನು. ಓದಿ ನೋಡಿ! ...ರಹಸ್ಯಮಯ ಕಾದಂಬರಿ.