Surabhi

· KK PRINTERS &PUBLISHERS
4,5
2 anmeldelser
E-bog
176
Sider
Bedømmelser og anmeldelser verificeres ikke  Få flere oplysninger

Om denne e-bog

ಈಚೆಗೆ ಆಧುನಿಕ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಹುಲುಸಾದ ಬೆಳೆ ಎದ್ದುಕಾಣುತ್ತಿದೆ. ಕತೆ, ಕವನ, ಕಾದಂಬರಿ ನಾಟಕ, ಪ್ರಬಂಧ, ಪ್ರವಾಸ ಸಾಹಿತ್ಯ, ಶಿಶುಸಾಹಿತ್ಯ, ವಿಚಾರಸಾಹಿತ್ಯ, ವಿಜ್ಞಾನಸಾಹಿತ್ಯ. ಹೀಗೆ ಹತ್ತು ಹಲವು ಬಗೆಗಳನ್ನು ವೈಶಿಷ್ಟö್ಯಮಯವಾಗಿ ತುಂಬಿಕೊಳ್ಳುತ್ತಿರುವ ಕನ್ನಡ ಸಾಹಿತ್ಯದಲ್ಲಿ ಸಂಶೋಧನಾ ಬರಹಗಳ ‘ಬರ’ಕಾಲಿಟ್ಟಿದೆ. ಕಳೆದ ಶತಮಾನ ಹೀಗಿರಲಿಲ್ಲ. ಆಗ ಸಂಶೋಧನಾ ರಂಗದಲ್ಲಿ ಅದರಲ್ಲೂ ಪ್ರಾಚೀನ ಸಾಹಿತ್ಯದ ಕುರಿತಾದ ಅಧ್ಯಯನ, ಅಧ್ಯಾಪನ, ಚರ್ಚೆ, ಗೋಷ್ಠಿಗಳು ನಡೆಯುತ್ತಿದ್ದವು . ಆಗಿನ ವಿಶ್ವವಿದ್ಯಾಲಯಗಳಲ್ಲಿ ಈ ಬಗ್ಗೆ ಕಮ್ಮಟ, ವಿಚಾರಸಂಕಿರಣ, ಪ್ರಚಾರೋಪನ್ಯಾಸಗಳು ಮೇಲುಗೈ ಪಡೆದಿದ್ದು ಅವುಗಳ ಫಲಗಳು ಪುಸ್ತಕ ರೂಪದಲ್ಲಿ ಹೊರಬರುತ್ತಿದ್ದವು. ಆದರೆ ಈಗ ಹಳೆಗನ್ನಡ ಹಾಗೂ ನಡುಗನ್ನಡ ಸಾಹಿತ್ಯಕೃತಿಗಳು ಶೈಕ್ಷಣಿಕ ಪಠ್ಯಗಳಿಂದ ದೂರ ಸರಿಯುತ್ತಿದ್ದು, ವಿದ್ವತ್‌ವಲಯದಲ್ಲೂ ಆಸಕ್ತಿ, ಚರ್ಚೆ, ಪ್ರಕಟಣೆ ತಾವುದೂ ಕಾಣಿಸುತ್ತಿಲ್ಲ. ಇಂತಹ ಪರಿಸ್ಥಿತ್ಯಲ್ಲಿ ಡಾ. ಎಸ್. ರಾಮಮೂರ್ತಿ ಶರ್ಮ ಅವರ ‘ಸುರಭಿ’ಕೃತಿಯ ಪ್ರವೇಶ ಗಮನಾರ್ಹವಾಗಿದೆ. 

ಶ್ರೀಯುತರು ನಿತಾಂತ ಪಂಡಿತರು. ಸಂಸ್ಕೃತವನ್ನು ಅದರಲ್ಲೂ ಯಜುರ್ವೇದ ವನ್ನು ಸಾಧ್ಯಂತವಾಗಿ ಅಧ್ಯಯನ ಮಾಡಿಕೊಂಡವರು. ತೆಲುಗುಭಾಷೆ ಮತ್ತು ಸಾಹಿತ್ಯದ ಪರಿಚಯ ಉಳ್ಳವರು. ಅವರ ಚಿಂತನಕ್ರಮ ಮತ್ತು ಬರವಣಿಗೆಗಳು ಈ ಹಿನ್ನೆಲೆಯಲ್ಲಿ ರೂಪುಗೊಂಡದ್ದು. ಪುರಾಣ ಹಾಗೂ ಇತಿಹಾಸದ ಬಗ್ಗೆ ಕುತೂಹಲ ಮತ್ತು ಆಳವಾದ ಅರಿವು ಹಾಗೂ ಅದನ್ನು ಬಗೆದು ಕಾಣುವ ಶಕ್ತಿ ಅವರಲ್ಲಿದೆ. ಆದ್ದರಿಂದಲೇ ಅವರು ತಮ್ಮ ಪಿಎಚ್.ಡಿ ಪದವಿಗಾಗಿ “ಬಸವಣ್ಣ-ಒಂದು ಐತಿಹಾಸಿಕ ಮತ್ತು ಪೌರಾಣಿಕ ಸಮೀಕ್ಷೆ”- ಎಂಬ ವಿಷಯವನ್ನು ಆಯ್ದು ಕೊಂಡು ಸಾದರಪಡಿಸಿದ್ದಾರೆ. ಅಲ್ಲೂ ಕೂಡ ಕನ್ನಡ, ತೆಲುಗು ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಪಡಿಮೂಡಿದ ಬಸವಣ್ಣನ ಪೌರಾಣಿಕ ವ್ಯಕ್ತಿತ್ವವನ್ನು ತೌಲನಿಕ ಅಧ್ಯಯನ-ಸಮೀಕ್ಷೆಗಳ ಮೂಲಕ ಹಿಡಿದಿಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. 

Bedømmelser og anmeldelser

4,5
2 anmeldelser

Om forfatteren

ಈಚೆಗೆ ಆಧುನಿಕ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಹುಲುಸಾದ ಬೆಳೆ ಎದ್ದುಕಾಣುತ್ತಿದೆ. ಕತೆ, ಕವನ, ಕಾದಂಬರಿ ನಾಟಕ, ಪ್ರಬಂಧ, ಪ್ರವಾಸ ಸಾಹಿತ್ಯ, ಶಿಶುಸಾಹಿತ್ಯ, ವಿಚಾರಸಾಹಿತ್ಯ, ವಿಜ್ಞಾನಸಾಹಿತ್ಯ. ಹೀಗೆ ಹತ್ತು ಹಲವು ಬಗೆಗಳನ್ನು ವೈಶಿಷ್ಟö್ಯಮಯವಾಗಿ ತುಂಬಿಕೊಳ್ಳುತ್ತಿರುವ ಕನ್ನಡ ಸಾಹಿತ್ಯದಲ್ಲಿ ಸಂಶೋಧನಾ ಬರಹಗಳ ‘ಬರ’ಕಾಲಿಟ್ಟಿದೆ. ಕಳೆದ ಶತಮಾನ ಹೀಗಿರಲಿಲ್ಲ. ಆಗ ಸಂಶೋಧನಾ ರಂಗದಲ್ಲಿ ಅದರಲ್ಲೂ ಪ್ರಾಚೀನ ಸಾಹಿತ್ಯದ ಕುರಿತಾದ ಅಧ್ಯಯನ, ಅಧ್ಯಾಪನ, ಚರ್ಚೆ, ಗೋಷ್ಠಿಗಳು ನಡೆಯುತ್ತಿದ್ದವು . ಆಗಿನ ವಿಶ್ವವಿದ್ಯಾಲಯಗಳಲ್ಲಿ ಈ ಬಗ್ಗೆ ಕಮ್ಮಟ, ವಿಚಾರಸಂಕಿರಣ, ಪ್ರಚಾರೋಪನ್ಯಾಸಗಳು ಮೇಲುಗೈ ಪಡೆದಿದ್ದು ಅವುಗಳ ಫಲಗಳು ಪುಸ್ತಕ ರೂಪದಲ್ಲಿ ಹೊರಬರುತ್ತಿದ್ದವು. ಆದರೆ ಈಗ ಹಳೆಗನ್ನಡ ಹಾಗೂ ನಡುಗನ್ನಡ ಸಾಹಿತ್ಯಕೃತಿಗಳು ಶೈಕ್ಷಣಿಕ ಪಠ್ಯಗಳಿಂದ ದೂರ ಸರಿಯುತ್ತಿದ್ದು, ವಿದ್ವತ್‌ವಲಯದಲ್ಲೂ ಆಸಕ್ತಿ, ಚರ್ಚೆ, ಪ್ರಕಟಣೆ ತಾವುದೂ ಕಾಣಿಸುತ್ತಿಲ್ಲ. ಇಂತಹ ಪರಿಸ್ಥಿತ್ಯಲ್ಲಿ ಡಾ. ಎಸ್. ರಾಮಮೂರ್ತಿ ಶರ್ಮ ಅವರ ‘ಸುರಭಿ’ಕೃತಿಯ ಪ್ರವೇಶ ಗಮನಾರ್ಹವಾಗಿದೆ. 

ಶ್ರೀಯುತರು ನಿತಾಂತ ಪಂಡಿತರು. ಸಂಸ್ಕೃತವನ್ನು ಅದರಲ್ಲೂ ಯಜುರ್ವೇದ ವನ್ನು ಸಾಧ್ಯಂತವಾಗಿ ಅಧ್ಯಯನ ಮಾಡಿಕೊಂಡವರು. ತೆಲುಗುಭಾಷೆ ಮತ್ತು ಸಾಹಿತ್ಯದ ಪರಿಚಯ ಉಳ್ಳವರು. ಅವರ ಚಿಂತನಕ್ರಮ ಮತ್ತು ಬರವಣಿಗೆಗಳು ಈ ಹಿನ್ನೆಲೆಯಲ್ಲಿ ರೂಪುಗೊಂಡದ್ದು. ಪುರಾಣ ಹಾಗೂ ಇತಿಹಾಸದ ಬಗ್ಗೆ ಕುತೂಹಲ ಮತ್ತು ಆಳವಾದ ಅರಿವು ಹಾಗೂ ಅದನ್ನು ಬಗೆದು ಕಾಣುವ ಶಕ್ತಿ ಅವರಲ್ಲಿದೆ. ಆದ್ದರಿಂದಲೇ ಅವರು ತಮ್ಮ ಪಿಎಚ್.ಡಿ ಪದವಿಗಾಗಿ “ಬಸವಣ್ಣ-ಒಂದು ಐತಿಹಾಸಿಕ ಮತ್ತು ಪೌರಾಣಿಕ ಸಮೀಕ್ಷೆ”- ಎಂಬ ವಿಷಯವನ್ನು ಆಯ್ದು ಕೊಂಡು ಸಾದರಪಡಿಸಿದ್ದಾರೆ. ಅಲ್ಲೂ ಕೂಡ ಕನ್ನಡ, ತೆಲುಗು ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಪಡಿಮೂಡಿದ ಬಸವಣ್ಣನ ಪೌರಾಣಿಕ ವ್ಯಕ್ತಿತ್ವವನ್ನು ತೌಲನಿಕ ಅಧ್ಯಯನ-ಸಮೀಕ್ಷೆಗಳ ಮೂಲಕ ಹಿಡಿದಿಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. 

Bedøm denne e-bog

Fortæl os, hvad du mener.

Oplysninger om læsning

Smartphones og tablets
Installer appen Google Play Bøger til Android og iPad/iPhone. Den synkroniserer automatisk med din konto og giver dig mulighed for at læse online eller offline, uanset hvor du er.
Bærbare og stationære computere
Du kan høre lydbøger, du har købt i Google Play via browseren på din computer.
e-læsere og andre enheder
Hvis du vil læse på e-ink-enheder som f.eks. Kobo-e-læsere, skal du downloade en fil og overføre den til din enhed. Følg den detaljerede vejledning i Hjælp for at overføre filerne til understøttede e-læsere.