Surabhi

· KK PRINTERS &PUBLISHERS
4.5
2 கருத்துகள்
மின்புத்தகம்
176
பக்கங்கள்
ரேட்டிங்குகளும் கருத்துகளும் சரிபார்க்கப்படுவதில்லை மேலும் அறிக

இந்த மின்புத்தகத்தைப் பற்றி

ಈಚೆಗೆ ಆಧುನಿಕ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಹುಲುಸಾದ ಬೆಳೆ ಎದ್ದುಕಾಣುತ್ತಿದೆ. ಕತೆ, ಕವನ, ಕಾದಂಬರಿ ನಾಟಕ, ಪ್ರಬಂಧ, ಪ್ರವಾಸ ಸಾಹಿತ್ಯ, ಶಿಶುಸಾಹಿತ್ಯ, ವಿಚಾರಸಾಹಿತ್ಯ, ವಿಜ್ಞಾನಸಾಹಿತ್ಯ. ಹೀಗೆ ಹತ್ತು ಹಲವು ಬಗೆಗಳನ್ನು ವೈಶಿಷ್ಟö್ಯಮಯವಾಗಿ ತುಂಬಿಕೊಳ್ಳುತ್ತಿರುವ ಕನ್ನಡ ಸಾಹಿತ್ಯದಲ್ಲಿ ಸಂಶೋಧನಾ ಬರಹಗಳ ‘ಬರ’ಕಾಲಿಟ್ಟಿದೆ. ಕಳೆದ ಶತಮಾನ ಹೀಗಿರಲಿಲ್ಲ. ಆಗ ಸಂಶೋಧನಾ ರಂಗದಲ್ಲಿ ಅದರಲ್ಲೂ ಪ್ರಾಚೀನ ಸಾಹಿತ್ಯದ ಕುರಿತಾದ ಅಧ್ಯಯನ, ಅಧ್ಯಾಪನ, ಚರ್ಚೆ, ಗೋಷ್ಠಿಗಳು ನಡೆಯುತ್ತಿದ್ದವು . ಆಗಿನ ವಿಶ್ವವಿದ್ಯಾಲಯಗಳಲ್ಲಿ ಈ ಬಗ್ಗೆ ಕಮ್ಮಟ, ವಿಚಾರಸಂಕಿರಣ, ಪ್ರಚಾರೋಪನ್ಯಾಸಗಳು ಮೇಲುಗೈ ಪಡೆದಿದ್ದು ಅವುಗಳ ಫಲಗಳು ಪುಸ್ತಕ ರೂಪದಲ್ಲಿ ಹೊರಬರುತ್ತಿದ್ದವು. ಆದರೆ ಈಗ ಹಳೆಗನ್ನಡ ಹಾಗೂ ನಡುಗನ್ನಡ ಸಾಹಿತ್ಯಕೃತಿಗಳು ಶೈಕ್ಷಣಿಕ ಪಠ್ಯಗಳಿಂದ ದೂರ ಸರಿಯುತ್ತಿದ್ದು, ವಿದ್ವತ್‌ವಲಯದಲ್ಲೂ ಆಸಕ್ತಿ, ಚರ್ಚೆ, ಪ್ರಕಟಣೆ ತಾವುದೂ ಕಾಣಿಸುತ್ತಿಲ್ಲ. ಇಂತಹ ಪರಿಸ್ಥಿತ್ಯಲ್ಲಿ ಡಾ. ಎಸ್. ರಾಮಮೂರ್ತಿ ಶರ್ಮ ಅವರ ‘ಸುರಭಿ’ಕೃತಿಯ ಪ್ರವೇಶ ಗಮನಾರ್ಹವಾಗಿದೆ. 

ಶ್ರೀಯುತರು ನಿತಾಂತ ಪಂಡಿತರು. ಸಂಸ್ಕೃತವನ್ನು ಅದರಲ್ಲೂ ಯಜುರ್ವೇದ ವನ್ನು ಸಾಧ್ಯಂತವಾಗಿ ಅಧ್ಯಯನ ಮಾಡಿಕೊಂಡವರು. ತೆಲುಗುಭಾಷೆ ಮತ್ತು ಸಾಹಿತ್ಯದ ಪರಿಚಯ ಉಳ್ಳವರು. ಅವರ ಚಿಂತನಕ್ರಮ ಮತ್ತು ಬರವಣಿಗೆಗಳು ಈ ಹಿನ್ನೆಲೆಯಲ್ಲಿ ರೂಪುಗೊಂಡದ್ದು. ಪುರಾಣ ಹಾಗೂ ಇತಿಹಾಸದ ಬಗ್ಗೆ ಕುತೂಹಲ ಮತ್ತು ಆಳವಾದ ಅರಿವು ಹಾಗೂ ಅದನ್ನು ಬಗೆದು ಕಾಣುವ ಶಕ್ತಿ ಅವರಲ್ಲಿದೆ. ಆದ್ದರಿಂದಲೇ ಅವರು ತಮ್ಮ ಪಿಎಚ್.ಡಿ ಪದವಿಗಾಗಿ “ಬಸವಣ್ಣ-ಒಂದು ಐತಿಹಾಸಿಕ ಮತ್ತು ಪೌರಾಣಿಕ ಸಮೀಕ್ಷೆ”- ಎಂಬ ವಿಷಯವನ್ನು ಆಯ್ದು ಕೊಂಡು ಸಾದರಪಡಿಸಿದ್ದಾರೆ. ಅಲ್ಲೂ ಕೂಡ ಕನ್ನಡ, ತೆಲುಗು ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಪಡಿಮೂಡಿದ ಬಸವಣ್ಣನ ಪೌರಾಣಿಕ ವ್ಯಕ್ತಿತ್ವವನ್ನು ತೌಲನಿಕ ಅಧ್ಯಯನ-ಸಮೀಕ್ಷೆಗಳ ಮೂಲಕ ಹಿಡಿದಿಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. 

மதிப்பீடுகளும் மதிப்புரைகளும்

4.5
2 கருத்துகள்

ஆசிரியர் குறிப்பு

ಈಚೆಗೆ ಆಧುನಿಕ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಹುಲುಸಾದ ಬೆಳೆ ಎದ್ದುಕಾಣುತ್ತಿದೆ. ಕತೆ, ಕವನ, ಕಾದಂಬರಿ ನಾಟಕ, ಪ್ರಬಂಧ, ಪ್ರವಾಸ ಸಾಹಿತ್ಯ, ಶಿಶುಸಾಹಿತ್ಯ, ವಿಚಾರಸಾಹಿತ್ಯ, ವಿಜ್ಞಾನಸಾಹಿತ್ಯ. ಹೀಗೆ ಹತ್ತು ಹಲವು ಬಗೆಗಳನ್ನು ವೈಶಿಷ್ಟö್ಯಮಯವಾಗಿ ತುಂಬಿಕೊಳ್ಳುತ್ತಿರುವ ಕನ್ನಡ ಸಾಹಿತ್ಯದಲ್ಲಿ ಸಂಶೋಧನಾ ಬರಹಗಳ ‘ಬರ’ಕಾಲಿಟ್ಟಿದೆ. ಕಳೆದ ಶತಮಾನ ಹೀಗಿರಲಿಲ್ಲ. ಆಗ ಸಂಶೋಧನಾ ರಂಗದಲ್ಲಿ ಅದರಲ್ಲೂ ಪ್ರಾಚೀನ ಸಾಹಿತ್ಯದ ಕುರಿತಾದ ಅಧ್ಯಯನ, ಅಧ್ಯಾಪನ, ಚರ್ಚೆ, ಗೋಷ್ಠಿಗಳು ನಡೆಯುತ್ತಿದ್ದವು . ಆಗಿನ ವಿಶ್ವವಿದ್ಯಾಲಯಗಳಲ್ಲಿ ಈ ಬಗ್ಗೆ ಕಮ್ಮಟ, ವಿಚಾರಸಂಕಿರಣ, ಪ್ರಚಾರೋಪನ್ಯಾಸಗಳು ಮೇಲುಗೈ ಪಡೆದಿದ್ದು ಅವುಗಳ ಫಲಗಳು ಪುಸ್ತಕ ರೂಪದಲ್ಲಿ ಹೊರಬರುತ್ತಿದ್ದವು. ಆದರೆ ಈಗ ಹಳೆಗನ್ನಡ ಹಾಗೂ ನಡುಗನ್ನಡ ಸಾಹಿತ್ಯಕೃತಿಗಳು ಶೈಕ್ಷಣಿಕ ಪಠ್ಯಗಳಿಂದ ದೂರ ಸರಿಯುತ್ತಿದ್ದು, ವಿದ್ವತ್‌ವಲಯದಲ್ಲೂ ಆಸಕ್ತಿ, ಚರ್ಚೆ, ಪ್ರಕಟಣೆ ತಾವುದೂ ಕಾಣಿಸುತ್ತಿಲ್ಲ. ಇಂತಹ ಪರಿಸ್ಥಿತ್ಯಲ್ಲಿ ಡಾ. ಎಸ್. ರಾಮಮೂರ್ತಿ ಶರ್ಮ ಅವರ ‘ಸುರಭಿ’ಕೃತಿಯ ಪ್ರವೇಶ ಗಮನಾರ್ಹವಾಗಿದೆ. 

ಶ್ರೀಯುತರು ನಿತಾಂತ ಪಂಡಿತರು. ಸಂಸ್ಕೃತವನ್ನು ಅದರಲ್ಲೂ ಯಜುರ್ವೇದ ವನ್ನು ಸಾಧ್ಯಂತವಾಗಿ ಅಧ್ಯಯನ ಮಾಡಿಕೊಂಡವರು. ತೆಲುಗುಭಾಷೆ ಮತ್ತು ಸಾಹಿತ್ಯದ ಪರಿಚಯ ಉಳ್ಳವರು. ಅವರ ಚಿಂತನಕ್ರಮ ಮತ್ತು ಬರವಣಿಗೆಗಳು ಈ ಹಿನ್ನೆಲೆಯಲ್ಲಿ ರೂಪುಗೊಂಡದ್ದು. ಪುರಾಣ ಹಾಗೂ ಇತಿಹಾಸದ ಬಗ್ಗೆ ಕುತೂಹಲ ಮತ್ತು ಆಳವಾದ ಅರಿವು ಹಾಗೂ ಅದನ್ನು ಬಗೆದು ಕಾಣುವ ಶಕ್ತಿ ಅವರಲ್ಲಿದೆ. ಆದ್ದರಿಂದಲೇ ಅವರು ತಮ್ಮ ಪಿಎಚ್.ಡಿ ಪದವಿಗಾಗಿ “ಬಸವಣ್ಣ-ಒಂದು ಐತಿಹಾಸಿಕ ಮತ್ತು ಪೌರಾಣಿಕ ಸಮೀಕ್ಷೆ”- ಎಂಬ ವಿಷಯವನ್ನು ಆಯ್ದು ಕೊಂಡು ಸಾದರಪಡಿಸಿದ್ದಾರೆ. ಅಲ್ಲೂ ಕೂಡ ಕನ್ನಡ, ತೆಲುಗು ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಪಡಿಮೂಡಿದ ಬಸವಣ್ಣನ ಪೌರಾಣಿಕ ವ್ಯಕ್ತಿತ್ವವನ್ನು ತೌಲನಿಕ ಅಧ್ಯಯನ-ಸಮೀಕ್ಷೆಗಳ ಮೂಲಕ ಹಿಡಿದಿಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. 

இந்த மின்புத்தகத்தை மதிப்பிடுங்கள்

உங்கள் கருத்தைப் பகிரவும்.

படிப்பது குறித்த தகவல்

ஸ்மார்ட்ஃபோன்கள் மற்றும் டேப்லெட்கள்
Android மற்றும் iPad/iPhoneக்கான Google Play புக்ஸ் ஆப்ஸை நிறுவும். இது தானாகவே உங்கள் கணக்குடன் ஒத்திசைக்கும் மற்றும் எங்கிருந்தாலும் ஆன்லைனில் அல்லது ஆஃப்லைனில் படிக்க அனுமதிக்கும்.
லேப்டாப்கள் மற்றும் கம்ப்யூட்டர்கள்
Google Playயில் வாங்கிய ஆடியோ புத்தகங்களை உங்கள் கம்ப்யூட்டரின் வலை உலாவியில் கேட்கலாம்.
மின்வாசிப்பு சாதனங்கள் மற்றும் பிற சாதனங்கள்
Kobo இ-ரீடர்கள் போன்ற இ-இங்க் சாதனங்களில் படிக்க, ஃபைலைப் பதிவிறக்கி உங்கள் சாதனத்திற்கு மாற்றவும். ஆதரிக்கப்படும் இ-ரீடர்களுக்கு ஃபைல்களை மாற்ற, உதவி மையத்தின் விரிவான வழிமுறைகளைப் பின்பற்றவும்.